ಮುಚ್ಚಿ

ಆಸಕ್ತಿಯ ಸ್ಥಳಗಳು

ಗುರುನಾನಕ್ ಝಿರಾ, ಬೀದರ

ಗುರುದ್ವಾರ ಬೀದರ ಸಿಖ್ಖರಿಗೆ ಅತ್ಯಂತ ಪವಿತ್ರ ಸ್ಥಳವಾಗಿದೆ. ಪ್ರತಿ ವರ್ಷ ಈ ಸಳ್ಥವು ದೇಶದ ಎಲ್ಲಾ ಭಾಗಗಳಿಂದ ವಿಶೇಷವಾಗಿ ನವೆಂಬರ್ ಮತ್ತು ಮಾರ್ಚ್ ತಿಂಗಳುಗಳಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ . ದಂತಕಥೆಯ ಪ್ರಕಾರ ಭೂಮಿ ಬರಗಾಲದ ಹಿಡಿತದಲ್ಲಿದ್ದಾಗ ಸಂತ ಗುರುನಾನಕ್ ಇಲ್ಲಿಗೆ ಭೇಟಿ ನೀಡಿದರು, ಗುರುಗಳು ಸ್ಥಳೀಯರ ಕೋರಿಕೆಯ ಮೇರೆಗೆ ಪವಾಡವನ್ನು ಮಾಡಿದರು ಮತ್ತು ಕೆಂಪುಗಲ್ಲು ಬೆಟ್ಟದಿಂದ ನೀರಿನ ಬುಗ್ಗೆ ಸ್ಪೋಟಗೊಂಡಿತು. ಈ ದಿನದವರೆಗೂ ಕೆಂಪುಗಲ್ಲು ಬಲೆಯಿಂದ ಸ್ಪಟಿಕ ಶುದ್ದ ನೀರು ಹರಿಯುತ್ತದೆ. ಈ ನೀರನ್ನು ಕುಡಿಯುವುದರಿಂದ ಅನೇಕ ಕಾಯಿಲೆಗಳು ಗುಣವಾಗುತ್ತವೆ ಎಂಬ ನಂಬಿಕೆ ಇದೆ.

ಬೀದರಿನಲ್ಲಿರುವ ಪಾಪನಾಶ ಶಿವ ದೇವಾಲಯ

ಸ್ಥಳೀಯ ಸಾಂಪ್ರದಾಯಿಕ ಮಾತುಗಳ ಪ್ರಕಾರ, ಈ ದೇವಾಲಯದಲ್ಲಿರುವ ಶಿವಲಿಂಗ ಮೂರ್ತಿಯು ಶ್ರೀರಾಮನು ಲಂಕಾದಿಂದ ಹಿಂದಿರುಗುವ ಸಮಯದಲ್ಲಿ ಸ್ಥಾಪಿಸಿದವುಗಳಲ್ಲಿ ಒಂದಾಗಿದೆ. ಕಣಿವೆಯಲ್ಲಿರುವ ದೇವಾಲಯದ ಸ್ಥಳವು ಕಣ್ಣಿಗೆ ಮೋಡಿಮಾಡುತ್ತದೆ. ಪ್ರತಿ ವರ್ಷ ಶಿವರಾತ್ರಿಯ ಸಮಯದಲ್ಲಿ ಈ ಸ್ಥಳಕ್ಕೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ . ದೇವಾಲಯದ ಮುಂಭಾಗದಲ್ಲಿರುವ ಕೊಳದಲ್ಲಿ ನೈಸರ್ಗಿಕ ಚಿಲುಮೆಯು ಹರಿಯುತ್ತದೆ. ಇದನ್ನು ಪಾಪನಾಶವೆಂದು ಕರೆಯಲಾಗುತ್ತದೆ.

ನರಸಿಂಹ ಝಿರಾ (ಜಲ ಗುಹೆ) ದೇವಾಲಯ

ಇಲ್ಲಿಯ ನಂಬಿಕೆಯ ಪ್ರಕಾರ ಸುಮಾರು 300 ಮೀಟರ್ ಗುಹೆಯಲ್ಲಿ ಶಕ್ತಿದೇವರು ನೆಲೆಸಿದ್ದಾರೆ. ಭಕ್ತರು ದರ್ಶನ ಪಡೆಯಲು ಎದೆಯ ಎತ್ತರದವರೆಗಿನ ನೀರಿನ ಮೂಲಕ ಗುಹೆಯೊಳಗೆ ಸಾಗಬೇಕು. ಗುಹೆಯ ಮೇಲ್ಛಾವಣಿಯಲ್ಲಿ ಬಾವಲಿಗಳು ಮತ್ತು ಗೂಬೆಗಳು ಕುಳಿತುಕೊಳ್ಳುವುದರಿಂದ ಇದು ರೋಮಾಂಚಕ ಅನುಭವಗಳನ್ನು ನೀಡುತ್ತದೆ. ಆದರೆ ಅವು ಭಕ್ತರಿಗೆ ಯಾವುದೇ ಹಾನಿ ಮಾಡುವುದಿಲ್ಲ. 1999ರಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಮಾಡುತ್ತಿದ್ದ ಮತ್ತು ಈ ದೇವಾಲದ ಸಮಿತಿಯ ಉಸ್ತುವಾರಿ ವಹಿಸಿದ್ದ ಯುವ ಐಎಎಸ್ ಅಧಿಕಾರಿ ಶ್ರೀ ಎಂ. ಮಹೇಶ್ವರ ರಾವ್ ಅವರ ಪ್ರಯತ್ನದಿಂದ ಗುಹೆಯನ್ನು ಹವಾನಿಯಂತ್ರಿತ ಮತ್ತು ವಿದ್ಯುದ್ದೀಕರಿಸಲಾಯಿತು.

ದೇವ ದೇವ ವನ

ಬೀದರ-ಹೈದರಾಬಾದ ಹೆದ್ದಾರಿಯಲ್ಲಿ ಬೀದರ ಪಟ್ಟಣದಿಂದ 6 ಕಿಮೀ ದೂರದಲ್ಲಿರುವ ಪರಿಸರ ಪ್ರವಾಸೋದ್ಯಮ ಕೇಂದ್ರ . ಇದು ಸುಮಾರು 3 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿದೆ. ಇದು ಶಹಾಪುರ ಮೀಸಲು ಅರಣ್ಯದ ಭಾಗವಾಗಿದ್ದು, ಪರಿಸರ ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲಾಗಿದೆ. ಈ ಉದ್ಯಾನವನವು ಪಂಚವಟಿವನ, ಅಶೋಕವನ, ರಾಶಿ ವನ(ರಾಶಿಚಕ್ರ), ನವಗ್ರಹ ವನ ಮುಂತಾದ ಭಕ್ತಿ ಹೆಸರುಗಳೊಂದಿಗೆ ವಿವಿಧ ಸಸ್ಯ ಮತ್ತು ಪ್ರಾಣಿಗಳನ್ನು ಒಳಗೊಂಡಿದೆ. ಇದು ವನಭೋಜನಕ್ಕೆ ಸೂಕ್ತವಾದ ಸ್ಥಳವಾಗಿದೆ. ಜನರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ರಜಾದಿನಗಳಲ್ಲಿ ಇಲ್ಲಿಗೆ ಬರಬಹುದು ಮತ್ತು ಈ ಸ್ಥಳವನ್ನು ಆನಂದಿಸಬಹುದು. ಮಕ್ಕಳ ಮನರಂಜನಾ ಪ್ರದೇಶವನ್ನು ನೀರಿನ ಸ್ಲೈಡ್ಗಳು ವರ್ಣರಂಜಿತ ಸ್ಲೈಡ್ಗಳು ಮತ್ತು ಕಾರಂಜಿಗಳ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ.

ಹುಮನಾಬಾದ ಮತ್ತು ಚಾಂಗಲೆರಾದಲ್ಲಿ ವೀರಭದ್ರೇಶ್ವರ ಜಾತ್ರೆ

ಹುಮನಾಬಾದ್ ತಾಲೂಕಿನಲ್ಲಿ ವೀರಭದ್ರೇಶ್ವರ ದೇವರ ಎರಡು ಪುರಾತನ ದೇವಾಲಯಗಳು ಇವೆ. ಒಂದು ಹುಮನಾಬಾದನಲ್ಲಿದೆ ಮತ್ತು ಇನ್ನೊಂದು ಚಾಂಗಲೆರಾ ಗ್ರಾಮದಲ್ಲಿದೆ. ಇವು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಕ್ರಮವಾಗಿ ಜನೆವರಿ ಮತ್ತು ನವೆಂಬರ್‍ನಲ್ಲಿ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ. 1725ರಲ್ಲಿ ನಿರ್ಮಿಸಲಾದ ಹುಮನಾಬಾದನಲ್ಲಿರುವ ದೇವಾಲಯವು ಚಲಿಸುವ ಕಂಬಕ್ಕೆ ಹೆಸರುವಾಸಿಯಾಗಿದೆ.

ಹುಮನಾಬಾದನಲ್ಲಿರುವ ಮಾಣಿಕಪ್ರಭು ದೇವಾಲಯ

ಇದು ಡಿಸೆಂಬರ್ ತಿಂಗಳಿನಲ್ಲಿ ಜರುಗುವ ವಾರ್ಷಿಕ ಆಚರಣೆಗಳ ಸಮಯದಲ್ಲಿ ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.ಪ್ರತಿ ವರ್ಷ ಇದೇ ಸಂದರ್ಭದಲ್ಲಿ ರಾತ್ರಿ ಶಾಸ್ತೀಯ ಸಂಗೀತ ಕಾರ್ಯಕ್ರಮ ನಡೆಯುತ್ತದೆ. ಇಲ್ಲಿಯವರೆಗೆ ಭೀಮಸೇನ ಜೋಶಿ, ಜಾಕೀರ್ ಹುಸೇನ್ ಸೇರಿದಂತೆ ಹಲವರು ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದಾರೆ.

ಕಲ್ಯಾಣ ಚಾಲುಕ್ಯ ದೇವಸ್ಥಾನ ಜಲಸಾಂಗ್ವಿ

ಜಲಸಾಂಗ್ವಿ ಬೀದರ ಜಿಲ್ಲೆಯ ಹುಮನಾಬಾದ ಬಳಿ ಇರುವ ಒಂದು ಪುರಾತನ ಗ್ರಾಮ. ಜಲಸಾಂಗ್ವಿ ರಾಜ ವಿರಾಟನ ರಾಜಧಾನಿಯಾಗಿತ್ತು ಮತ್ತು ಪಾಂಡವ ಸಹೋದರರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿ ಸಮಯವನ್ನು ಕಳೆದರು ಎಂದು ನಂಬಲಾಗಿದೆ. ಇದು ಪ್ರಮುಖ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಸಮಯದಲ್ಲಿ ನಿರ್ಮಿಸಲ್ಪಟ್ಟಿತು. ಜಲಸಾಂಗ್ವಿ ಯಲ್ಲಿರುವ ಕಲ್ಯಾಣ ಚಾಲುಕ್ಯ ದೇವಾಲಯದ ಹೊರಗೋಡೆಗಳು ಸುಂದರವಾದ ಶಿಲ್ಪಗಳನ್ನು ಒಳಗೊಂಡಿದೆ, ಇದರಲ್ಲಿ ವಿವಿಧ ನೃತ್ಯ ಭಂಗಿಗಳಲ್ಲಿ “ಶಿಲಾಬಾಲಿಕೆಯರ” (ಮಹಿಳಾ ನರ್ತಕಿಯರ ಕೆತ್ತನೆಗಳು) ಹಲವಾರು ಪ್ರಾತಿನಿಧ್ಯಗಳು, ಆಭರಣಗಳೊಂದಿಗೆ ಪೂರ್ಣಗೊಂಡಿವೆ. ಚಕ್ರವರ್ತಿ ವಿಕ್ರಮಾದಿತ್ಯನನ್ನು ವಿವರಿಸುವ ಕನ್ನಡ ಅಕ್ಷರಗಳಲ್ಲಿ ಸಂಸ್ಕೃತದ ಶಿಲಾಶಾಸನವನ್ನು ಕೆತ್ತಿರುವಂತೆ ಚಿತ್ರಿಸಲಾದ ಮಹಿಳೆಯ ಶಿಲ್ಪವಿದೆ. ಜಲಸಾಂಗ್ವಿಯ ಶಿಲ್ಪಗಳು ಬೇಲೂರು ಮತ್ತು ಹಳೇಬೀಡು ದೇವಾಲಯಗಳಲ್ಲಿನ ಶಿಲ್ಪಗಳನ್ನು ಪ್ರೇರೇಪಿಸಿವೆ ಎಂದು ನಂಬಲಾಗಿದೆ.

ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ, (ಗುಂಪಾ) ಬೀದರ್

ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ(ಗುಂಪಾ)ವನ್ನು 1986 ರಲ್ಲಿ ಶ್ರೀ ಶಿವಕುಮಾರ್ ಸ್ವಾಮೀಜಿಯವರು ನಿರ್ಮಿಸಿದ್ದಾರೆ. ಶ್ರೀ ಸಿದ್ದಾರೂಢ ಪ್ರತಿಮೆಯ ಎರಡೂ ಬದಿಗಳಲ್ಲಿ 12 ಜ್ಯೋತಿರ್ಲಿಂಗಗಳಿವೆ. ಇದು ಬೀದರಿನ ಮನ್ನಳ್ಳಿ ರಸ್ತೆಯಲ್ಲಿರುವ ದೇವಾಲಯವಾಗಿದೆ. ಇದನ್ನು ಗುಂಪಾ ಎಂದೂ ಕರೆಯುತ್ತಾರೆ. ಕಳೆದ ಮೂರು ದಶಕಗಳಿಂದ ಶ್ರೀ ಸಿದ್ದಾರೂಢ ಮಠ (ಗುಂಪಾ) ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿದೆ. ಶ್ರೀ ಶಿವಕುಮಾರ್ ಸ್ವಾಮೀಜಿವರು ಜುಲೈ (ಶ್ರಾವಣ ಮಾಸ), ನವರಾತ್ರಿ ಮತ್ತು ಪ್ರತಿ ಭಾನುವಾರ ಸಂಜೆ ಪ್ರವಚನ ನೀಡುತ್ತಾರೆ. ಅವರಲ್ಲಿ ಬಹಳಷ್ಟು ಭಕ್ತರು ಆಧ್ಯಾತ್ಮಿಕ ಹಸಿವನ್ನು ನೀಗಿದ್ದಾರೆ. ಬೀದರಿನಲ್ಲಿ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಶಕ/ಭಕ್ತರು, ಯಾವುದೇ ಭಕ್ತ ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ಅವರ ಯಾತ್ರೆ ಅಪೂರ್ಣವಾಗುತ್ತದೆ. ಪ್ರತಿ ವರ್ಷ ಸದ್ಗುರು ಸಿದ್ದಾರೂಢ ಮತ್ತು ಶಿವಕುಮಾರ ಮಹಾಸ್ವಾಮೀಜಿ ಜಯಂತಿಯನ್ನು ಆಚರಿಸಲು ಭಾರತದ ಎಲ್ಲಾ ಭಾಗಗಳಿಂದ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರೆ. ಇದನ್ನು ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ.